Monday, December 30, 2013

ಬೆಳಕಿನ ಪ್ರೀತಿಯ ಸಾಂತ್ವನವೋ? ಕತ್ತಲಿನ ಮೌನ ಮುಗುಳ್ನಗೆಯೋ?!!

Happy New Year-2014! Jepee Bhat



ಅಮಾವಾಸ್ಯೆಯಂದು ಮತ್ತೆ ಅವಳ ನಗು,
ಸುಮ್ಮನೆ ಬೆಳಕಿನಾಟವೆಂದು ತಿಳಿಯಲೋ?
ಅಥವಾ ಕತ್ತಲಿನ ಶುದ್ಧ ಮೂರ್ಖತನವೋ?
ಹುಣ್ಣಿಮೆಯಂದು ಮತ್ತವಳದೇ ಅಳುವಿಗೆ,
ಬೆಳಕಿನ ಪ್ರೀತಿಯ ಸಾಂತ್ವನವೋ?
ಕತ್ತಲಿನ ಮೌನ ಮುಗುಳ್ನಗೆಯೋ?!!

----------------------------------------------------------

ಕಸ್ತೂರಿ ಘಮಕ್ಕೆ ಮನಸೋತ ಪ್ರಬುದ್ಧ ಮನಸೋ?
ತಾಳ-ಮೇಳವಿಲ್ಲದೆ ಜೀಕುತ್ತಿರುವ ಹೃದಯದ ಮುನಿಸೋ?
ಮೌನ-ಮಾತಿಗೆ, ಪ್ರೀತಿ-ದ್ವೇಷಕ್ಕೆ, ಕಾರಣಗಳೇ ಬೇಕಿಲ್ಲ..
ಇರುವ, ಭಯದಿಂದ ಕಂಗೆಟ್ಟಿರುವ ಶರೀರಕ್ಕೆ ಸಮಾಧಾನವೇ ಸಾಕಲ್ಲ..

----------------------------------------------------------

ಮತ್ತದೇ ಕೋಪ, ಕಾರಣವಿಲ್ಲದ ಜಗಳ, ದೊಡ್ಡ ಗೋಡೆಯನ್ನು ಕಟ್ಟದಿರಲಿ..
ಹೊಸ ವರುಷವನ್ನು ಬಾಚಿ ತಬ್ಬೋಣ, ಮುಖದ ಮೇಲಿನ ನಗೆಯು ಎಂದಿಗೂ ಮಾಸದಿರಲಿ..

----------------------------------------------------------

ಬೀಸುವ ಗಾಳಿ, ಹರಿಯುವ ನೀರು, ನಿನ್ನ ಕಣ್ಣಿನ ಕಪ್ಪು ಎಲ್ಲದರಲ್ಲೂ ನಿನದೇ ನೆನಪು..
ಈ ಬರುತ್ತಿರುವ ವರ್ಷವಾದರೂ ಆರಿಸದಿರಲಿ ಮನೆ ದೀಪದ ನಲಿಯುವ ಒಲವಿನ ಒನಪು!! :)

-----------------------------------------------------------

''ಇನ್ನೇನು ಮುಗಿಯಲಿರುವ ಈ ವರ್ಷದ ಕೊನೆಗೆ, ತಾನೂ ಸಹ ಮುಗಿಯುತ್ತೇನೆಂದು ಗೊತ್ತಿದ್ದೂ ಸಹ ಈಗ ಏಳಲಿರುವ ಹೊಸ ವರ್ಷದ ಸ್ವಾಗತಕ್ಕೆ ನನ್ನ ಕೊನೆಯ ಮತ್ತು ಮೊದಲ ಕೆಲವು ಸಾಲುಗಳು''
❤❤''ಅಂತ್ಯ'' ಆರಂಭವೂ ಹೌದು, ಕೊನೆಯೂ ಹೌದು!❤❤
ಎಲ್ಲರಿಗೂ ಹೊಸ ವರ್ಷ ಶುಭವನ್ನೇ ಉಂಟುಮಾಡಲಿ :) :) ಹೊಸ ವರ್ಷ ೨೦೧೪ ರ ಹಾರ್ದಿಕ ಶುಭಾಶಯಗಳು :) :)
-- ಜೇಪೀ ಭಟ್ :)
----------------------------------------------------------

Wednesday, November 20, 2013

ಸಂಭ್ರಮಿಸಲು ಕಾರಣಗಳು ಬೇಕೇ ಬೇಕಾ..?!

www.jpbhat.blogspot.in
Jepee Bhat


ಇತ್ತೀಚೆಗೆ ಸಂಭ್ರಮಿಸಲು ಕಾರಣಗಳೇ ಸಿಗುತ್ತಿಲ್ಲ,
ಹುಟ್ಟಿದ ಮಗು ಕೂಡ ತೊಟ್ಟಿಗೆ ಬಾಯಿ ಹಾಕಿ  ಚೀಪುತ್ತಿಲ್ಲ,
ಕೊಟ್ಟಿಗೆಯ ಪುಟ್ಟ ಕರು ಕೂಡ ನನ್ನ ಕೈ ಕಂಡೊಡನೆ ಜಿಗಿದು ಬರುತ್ತಿಲ್ಲ,
ನಿನ್ನೆ ಅರಳಿದ ಸುಂದರ ಕೆಂಡ ಸಂಪಿಗೆಯೂ ಕಂಪು ಬೀರುತ್ತಿಲ್ಲ..

ಮೊನ್ನೆ ಹೂವಾಗಿದ್ದ ಹಲಸಿನ ಚಿಗುರೂ ಕಾಯಿ ಬಿಟ್ಟಿಲ್ಲ,
ಅಪ್ಪ  ನೆಟ್ಟ ತೆಂಗಿನ ಗಿಡ ಭೂಗರ್ಭ ಸೀಳಿ ಕಾಯಿಯೇ ಬಿಟ್ಟಿಲ್ಲ,
ಮಳೆಯ ಹನಿಗಳಿಗೆ ಎಷ್ಟೇ ಮುಖ ಒಡ್ಡಿದರೂ ನನ್ನ ಕಣ್ಣೀರು ನಿಂತಿಲ್ಲ,
ಬೊಗಸೆ ಒಡ್ಡಿ  ಬೇಡಿದರೂ ಇನ್ನೂ ಚಂದ್ರ ಮತ್ತು ನಕ್ಷತ್ರ ಕೈಗೆ ಬಿದ್ದಿಲ್ಲ..

ಅಪರೂಪಕ್ಕೆ ಕಂಡ ನಿನ್ನ ಕನಸೂ ಸರಿಯಾಗಿ ಪೂರ್ತಿ ಬೀಳುತ್ತಿಲ್ಲ,
ಕತ್ತಲಿನಿಂದ ಆಚೆ ಬರಲು ಮನೆಯ ಮಾಳಿಗೆಯ ಮೇಲೆ ಸೂರ್ಯನೂ ಏರುತ್ತಿಲ್ಲ,
ಜಗತ್ತಿನಲ್ಲಿ ಎಲ್ಲರಿಗೂ ಹೀಗೆಯೇ ಆಗುತ್ತಿದ್ದರೂ ಸುಮ್ಮನೇ ನಾಚಿಕೆಯಿಂದ ಯಾರೂ ಹೇಳುತ್ತಿಲ್ಲ,
ಹೌದು, ಇತ್ತೀಚೆಗೆ ನನಗೆ ಯಾಕೋ ಸಂಭ್ರಮಿಸಲು ಕಾರಣಗಳೇ ಸಿಗುತ್ತಿಲ್ಲವಲ್ಲ...!!

Monday, November 04, 2013

ನಿನ್ನ ಪ್ರೀತಿಯ ಬೆಚ್ಚನೆಯ ಪರಿಮಳವಾದರೂ ಸೂಸಲಿ ನನ್ನ ಈ ಪ್ರೀತಿಯ ಅಂಗಡಿಯ ಕಡೆಗೇ...!!

Bhat Jepee
Image source - Internet!


ಸುಮ್ಮನೆ ಒಂದಿಷ್ಟು ಕನಸು, ಪ್ರೀತಿಗಳ ರಾಶಿ ಹಾಕಿ,
ಅಂಗಡಿ ಹಾಕಿ ಕೂತಿರುವೆ ಒಂದಷ್ಟು ದಿನದಿಂದ..
ಇನ್ನಾದರೂ ದೂರ ತಳ್ಳಿ ನಿನ್ನ ನಾಜೂಕು, ಕೋಪವ,
ಕೊಳ್ಳಲು ಬರುವೆಯಾ ಒಂದಿನಿತಾದರೂ ಈ ನನ್ನ ಪ್ರೀತಿಯ..?

ಪ್ರೀತಿ ಕನಸಿನ ತರಹ ರಾತ್ರಿಯಿಂದ ಬೆಳಗಿನವರೆಗೆ,
ಬಂದು ಹೋಗುವ ಸಾದಾ ಸೀದಾ ಸರಕಲ್ಲ,
ವರ್ಷದ ವಿರಹದ ಬೇಗುದಿಯ ತವಕದ ರೋದನೆ,
ಕೇಳಲು, ಕೊಳ್ಳಲು ಬಾ ಇನ್ನಾದರೂ ಈ ಪ್ರೀತಿ ನಿವೇದನೆ..

ಹೋದ ಕಡೆಯೆಲ್ಲಾ ನಿನ್ನದೇ ಮುಖ, ನಗುವೆಲ್ಲಾ ಚೆಲ್ಲಿದೆ,
ಹೃದಯದ ಬಿಗಿತ, ಜಿಗಿತ ನನ್ನ ಹಿಡಿತ ಮೀರಿ ಎಲ್ಲೋ ನಿಂತಿದೆ.
ಈಗಲಾದರೂ ನನ್ನ ಅಂಗಡಿ ಮುಖಕ್ಕೆ ಮುಖ ಹಾಕಿ ಹೋಗು ಚೆಲುವೆ,
ನಿನ್ನ ಪ್ರೀತಿಯ ಬೆಚ್ಚನೆಯ ಪರಿಮಳವಾದರೂ ಸೂಸಲಿ ನನ್ನ ಈ ಪ್ರೀತಿಯ ಅಂಗಡಿಯ ಕಡೆಗೇ...!!

Wednesday, May 08, 2013

ನೀರಲ್ಲಿ ತೊಯ್ದ ನಮ್ಮ ಮನೆಯದೇ ಆದ ಮಲ್ಲಿಗೆಯ ಹೂವ ದಂಡೆ...!

Jepee Bhat..

ಮಳೆಯ ಕೊರೆತಕ್ಕೆ ಸಿಕ್ಕ ಮಣ್ಣು ಸೂಸಿದೆ ಪರಿಮಳ
ಇದರ ಪರಿವೇ ಇಲ್ಲದ ಮನಸುಗಳ ಮುದ್ದು ತಳಮಳ,
ಎಂದೋ ಕಣ್ಣಿಗೆ ಕಂಡ ಕಿಟಕಿಯ ಹೊರಗಿನ ಅವಳ ಸುಂದರ ಕೂದಲು
ಮತ್ತೆ ಮತ್ತೆ ಒತ್ತಿ ಹೇಳಿವೆ ಹೃದಯಕ್ಕೆ ಅಲ್ಲೇ ನೋಡಲು..

ಮಿಂಚು ಬರಸೆಳೆದು ಮೋಡಕ್ಕೆ ಅಪ್ಪಿ ಕೊಟ್ಟ ಮುತ್ತು
ಮತ್ತದೇ ದೊಡ್ಡ ಸಣ್ಣ ಹನಿಯಾಗಿ ಖುಷಿಯಾಗಿ ನೆಲಕ್ಕೆ ಬಿತ್ತು,
ಅದನ್ನರಿತ ಬಾಳೆ, ಕೆಸು, ಹಲಸಿನೆಲೆಗಳು ಮೆಲ್ಲನೆ ಗೊಣಲ್ಲಾಡಿಸಲು
ಅಂಬಾ ಎನುತ ಕೊಟ್ಟಿಗೆಯಲ್ಲಿನ ಗೌರಿ ತುಂಬಿಸಿತು ಚೊಂಬು ನೊರೆ ಹಾಲು..

ದಿನಾ ನೋಡಿದ ಅವಳನ್ನೇ ಕಲ್ಪಿಸಿ ಕೊಯ್ದ
ನಮ್ಮದೇ ಮನೆಯ ಮಲ್ಲಿಗೆ ಹೂವ ಮತ್ತೆ ಕಂಡೆ,
ಮರುದಿನ ಅವಳದೇ ಮನೆಯಲ್ಲಿ ಕೆಂಪನೆಯ ಸೀರೆಯಲ್ಲಿ ಅವಳ ಮುಡಿಯಲ್ಲಿ
ನೀರಲ್ಲಿ ತೊಯ್ದ ನಮ್ಮ ಮನೆಯದೇ ಆದ ಮಲ್ಲಿಗೆಯ ಹೂವ ದಂಡೆ...!!:):)

Saturday, October 27, 2012

ನಿನ್ನದೇ ನೆನಪಿನ ಕರಿ ನೆರಳಾಗಿ ಯಾವತ್ತೂ ನನ್ನನ್ನೇ ಬೆಂಬತ್ತಲಿ..

Jp Bhat..


ಎಂದೆಂದಿಗೂ ಕಂಡೂ ಕಾಣದ ನಿನ್ನ ಕರಿ ನೆರಳು,
ಬಿಸಿಲ ಶಾಖಕ್ಕೆ ಸತ್ತು ಹೋಗಬಾರದೇಕೆ?
ಇರುವ ಮತ್ತೇರುವ ನಿನ್ನ ಪ್ರೀತಿಯ ಗುಂಗಲ್ಲೇ,
ಬದುಕಿದ್ದೂ ನನ್ನ ಪ್ರೀತಿ ಸಾಯಬಾರದೇಕೆ?

ಈಗಿರುವ ನನ್ನ ಜೀವನದ ಪ್ರೀತಿಯಷ್ಟನ್ನೂ ಬಸಿದು ಹೊಸೆದು,
ನಿನಗೆ ಕೊಟ್ಟಿರುವೆ ನನ್ನ ಅರ್ಧ ಜೀವವನ್ನೇ.
ಬರುವ ಮತ್ತಿನ್ಯಾರೋ ಹುಡುಗಿಗೆ ಕೊಂಚವಾದರೂ,
ಮನಸು ದೇಹವನ್ನು ಉಳಿಸಬಾರದೇಕೆ ಇನ್ನು ನನ್ನ ಜೀವನಕ್ಕೆ?

ಇದ್ದ ಅವೆಷ್ಟೋ ಅಷ್ಟೂ ನೆನಪುಗಳು ಸಿಹಿ ಕಹಿಗಳಲ್ಲಿ,
ಇನ್ನಾದರೂ ಬೆಳಕಿನಿಂದ ಕತ್ತಲೆಗೆ ಸರಿಯಲಿ..
ಇರುವ ನಿನ್ನ ಮೇಲಿನ ಭಾವನೆಗಳೆಲ್ಲ ನೀರಾಗಿ ಹರಿದು ಆರಿ,
ಮತ್ತೆ ನಿನ್ನದೇ ನೆನಪಿನ ಕರಿ ನೆರಳಾಗಿ ಯಾವತ್ತೂ ನನ್ನನ್ನೇ ಬೆಂಬತ್ತಲಿ..

Wednesday, June 13, 2012

''ಮರೆತರೂ ನೆನಪಾಗುವ ಮುನ್ನ''

JP bhat...



ಭಾವಗಳ ಬಂಧನದಲ್ಲಿ ಕೊರಗಿ ಸೊರಗಿದೆ ಚಿಂತನೆ,
ತಣಿಯಲು ಬೇಕು ಚೈತನ್ಯದ ನವಜೀವನ..
ಮುಸುಕಲ್ಲೇ ನಸುಕ ತರಿಸುವ ತಿಳಿಯಾದ ಕಿರಣ,
ಬಯಸಿದೆ ಕಂಪ ಸೂಸುವ ಈಗಿನ ಹೊಸ ಸುಮ...

ಬದುಕೆಂದರೆ ಏನೇನೋ ಅಂದರು ತಿಳಿದ ಪ್ರಬುದ್ಧರು,
ತಿಳಿಯದ ನಾವು ಏನೆಂದುಕೊಂಡರೂ ಸಣ್ಣವರು..
ಮಾಡಿದ್ದೊಂದೇ ತಪ್ಪು, ತಿಳಿಯದೇ ನೋಡಿದ ಅವಳ ಕಣ್ಣು,
ಆಮೆಲೇನಾಯಿತೋ ಗೊತ್ತಿಲ್ಲ, ಆದದ್ದೆಲ್ಲ ವಿಸ್ಮಯ..!!

ಮತ್ತೆ ಬದುಕಲ್ಲಿ ಪುಟಿದು ಮೇಲೆದ್ದೇಳುವ ಕನಸಿನ ಆಶಯ,
ಹೊಸದಾಗಿ ಹಸಿರಾಗಿ ಚಿಗುರಲು ಬಿಡುವಳೋ ಅವಳು..?
ಒಂದೇ ಒಂದು ಸಲಕ್ಕೆ ಅನಾಮತ್ತಾಗಿ ಸೇರಿದ ತೆಕ್ಕೆ, ಮುತ್ತು...
ಇನ್ನೆಲ್ಲಿ ಈ ಪುಟ್ಟ ಸತ್ತ ಮನಕ್ಕೆ ಶಾಂತಿ ಮತ್ತು ನೆಮ್ಮದಿ.........??!

Thursday, December 01, 2011

ಇನ್ನೂ ಮುಗಿದಿಲ್ಲ ಕಷ್ಟದ ಕಲ್ಲು-ಮುಳ್ಳುಗಳ ಹಾದಿ, ಎಲ್ಲಿ ನೋಡಿದರೂ ನನ್ನ ಕಡೆಯೇ ನಗುವ ಜನರ ಬೀದಿ..


JP --power of youth--*


ಇನ್ನೂ ಮುಗಿದಿಲ್ಲ ಕಷ್ಟದ ಕಲ್ಲು-ಮುಳ್ಳುಗಳ ಹಾದಿ,
ಎಲ್ಲಿ ನೋಡಿದರೂ ನನ್ನ ಕಡೆಯೇ ನಗುವ ಜನರ ಬೀದಿ..
ಅವರಿಗಿನ್ನೂ ಗೊತ್ತಿದ್ದಂತಿಲ್ಲ ಎಲ್ಲರ ಸಾವು-ನೋವು,
ತಿಳಿಯಲಿಲ್ಲ ಇನ್ನೂ ಎಲ್ಲರ ಬದುಕೂ ಇಷ್ಟಿಷ್ಟು ಬೇವು-ಬೆಲ್ಲ..

ಎಲ್ಲ ಕಡೆಯೂ ಎಲ್ಲರದ್ದೂ ನಾನಾ ವಿಧದ ಕಷ್ಟಗಳದ್ದೇ ಸಾಲು ಸಾಲು ಸಂತೆ,
ಮತ್ತೆ ಅವರಿಗೆ ಗೊತ್ತಿದ್ದಂತಿಲ್ಲ ಕಷ್ಟದ ತೆರೆಗೆ ಪರಿಹಾರ ನೋಟಿನ ಕಂತೆ ಕಂತೆ..
ಎಲ್ಲಿ ನೋಡಿದರಲ್ಲಿ ಅಪಹಾಸ್ಯ, ಕೊಲೆ, ಭ್ರಷ್ಟಾಚಾರ..
ತಿಳಿಯಲಿಲ್ಲ ಇನ್ನೂ ಈಗಾದರೂ ಸ್ವಲ್ಪ  ಕಲಿಯಲು ಶಿಷ್ಟಾಚಾರ..

ಎಲ್ಲ ಕಡೆ ಎಲ್ಲರ ಜೋರಾದ ತೋರ್ಪಡಿಕೆಯ ಭರ್ಜರಿ  ಕಾರು ಬಾರು..
ಜನಸಾಮಾನ್ಯರಿಗೆ ಇದೆಯಲ್ಲ ಮೊದಲಿನ ಹಳೆಯದೇ ''ಕಾರು''-''ಬಾರು''
ಇನ್ನಾದರೂ ನಿಲ್ಲಿಸಿ ದುಡ್ಡಿನ, ಕುಡಿತದ ಆಸೆಯ, ಬಟ್ಟೆಯ ಸಲುವಾಗಿ ವೋಟು,
ತಿಳಿಯಲಿ ಇನ್ನಾದರೂ, ಬರಲಿ ಓದಿದವರ ಹೊಸ ಬುದ್ಧಿವಂತ ತರುಣರ ಕೋಟು...!

Saturday, November 12, 2011

ಅದು ನಿಜವಾಗದಿರಲಿ ಭಗವಂತ...

Jay bhat.

ಬಹಳ ದಿನಗಳಿಂದ ಹಪಹಪಿಸುತ್ತಿದ್ದೆ,
ಅವಳ ಬರುವಿಕೆಗಾಗಿ.,
ಅವಳು ಅಂದು ಬಂದಳು,
ಕಾಣದ ನೆರಳಾಗಿ, ತಾಕದ ಗಾಳಿಯಾಗಿ..

ಮತ್ತೆಲ್ಲೋ ನೋಡುತ್ತಾ ಕುಳಿತಿದ್ದಾಗ,

ಮತ್ತೆ ಬಂದಳು ಕಣ್ಣೀರ ನೆನಪಾಗಿ,
ಎಲ್ಲ ಖುಷಿಯ ಸೊಗಡಾಗಿ, ಮನದ ಹಾಡಾಗಿ..
ನೆನಪಿನಂಗಳದ ಚಿಲುಮೆಯಾಗಿ, ಚೈತನ್ಯವಾಗಿ...

ಇಂದು ಮತ್ತೇಕೋ ನನ್ನಲ್ಲೇ ನೋವು, ಮೌನ,.

ಮತ್ತೆ ಅವಳೇ ಸುಮ್ಮನೇ ನೆನಪಾಗುತ್ತಿದ್ದಾಳೆ...
ನನ್ನ ಕನಸಲ್ಲೂ ಸಹ, ಅದು ನಿಜವಾಗದಿರಲಿ ಭಗವಂತ...
ಕಂಡಿತು ಯಾಕೋ ಭಯದ ನೆರಳು, ಬೇರೆಯವನ ಜೊತೆ ಇಂದೇ ಅವಳ ಮದುವೆಯಂತ...

Friday, September 16, 2011

ನನ್ನಲ್ಲಿ ನಾನಿಲ್ಲದಿದ್ದಾಗ ನೀನಾದೆ ನಾನು, ನೀನೇ ನಾನಾದರೆ ಆಗ ನೀನು ಯಾರು?

JEPEE BHAT.
 ನನ್ನ ಜೀವನದ ಸ್ಪೂರ್ತಿ ನೀನು,
ನನ್ನ ಚೈತನ್ಯದ ಚಿಲುಮೆ ನೀನು,
ನನ್ನ ಮೊಗದ ನಗುವಿನ ನಗು ನೀನು,
ನನ್ನ ಎಲ್ಲ ಭಾವನೆಗಳ ಭಾವಗಳ ಮೆರುಗು ನೀನು..

ನನ್ನ ಖುಷಿಯ ಸಂಕೇತ ನೀನು,
ನನ್ನ ವಿಜಯದ ಸಂಭ್ರಮದ ಭಾಗ ನೀನು,
ನನ್ನ ಜೀವನದ ಜೀವದ ಗೆಳತಿ ನೀನು,
ನನ್ನ ಉಸಿರಾಟದ ಉಸಿರು ನೀನು..

ನನ್ನ ಪ್ರತಿಯೊಂದು ಕಾರ್ಯಕ್ಕೂ ಕಾರಣ ನೀನು,
ನನ್ನ ಏಳಿಗೆಯ ಎತ್ತರದ ಏಣಿ ನೀನು,
ನನ್ನಲ್ಲಿ ನಾನಿಲ್ಲದಿದ್ದಾಗ ನೀನಾದೆ ನಾನು,
ನೀನೇ ನಾನಾದರೆ ಆಗ ನೀನು ಯಾರು?

Wednesday, August 17, 2011

ಜೀವನವೇ ಹಾಗೆ, ಬಣ್ಣ ಬಣ್ಣದ ಹಾಳೆ...... ನನಗೆ ಮಾತ್ರ ಎಂದಿಗೂ ಕಪ್ಪು ಬಿಳುಪು ನಾಳೆ!!:(

Jepee Bhat..
ಎಷ್ಟು ದೇವರ ನೋಡಿದರೇನು, ಹುಂಡಿಗೆ ಹಾಕಿದರೇನು ಕಂತೆ,
ಯಾರೂ ಕಣ್ಣು ಬಿಟ್ಟಿಲ್ಲ, ಮತ್ತದೇ ಕೆಟ್ಟ ಹಳೆಯ ಚಿಂತೆ,
ಎಲ್ಲ ದಾರಿಯೂ ಎಲ್ಲೆಡೆ ವಿಫಲ....
ನಾನು ಎಲ್ಲಿಯೂ ಆಗುವುದಿಲ್ಲ  ಸಫಲ...

ಎಲ್ಲ ದಾರಿ, ಬಾಗಿಲುಗಳೂ ಮುಚ್ಚಿವೆ..
ನನ್ನ ಕಣ್ಣುಗಳೂ ಸದ್ದಿಲ್ಲದೇ ಮುಚ್ಚಲಿವೆ....
ಆಕಾಶದಲ್ಲಿ ಪಕ್ಷಿಗಳು ರೆಕ್ಕೆ ಬಿಚ್ಚಿ ಹಾರಿವೆ,
ನನ್ನ ಆತ್ಮ ಶಾಂತಿಯಿಲ್ಲದೇ ತೇಲಿವೆ..

ಎಷ್ಟೆಂದರೂ ಅಷ್ಟೇ, ಹುಟ್ಟಿದರೂ ಸತ್ತರೂ..
ಅತ್ತರೂ ನಕ್ಕರೂ ಬಿದ್ದರೂ ಎದ್ದರೂ.....
ಜೀವನವೇ ಹಾಗೆ, ಬಣ್ಣ ಬಣ್ಣದ ಹಾಳೆ......
ನನಗೆ ಮಾತ್ರ ಎಂದಿಗೂ ಕಪ್ಪು ಬಿಳುಪು ನಾಳೆ!!:(:(

Saturday, August 13, 2011

ಎಂದೋ ಕಂಡ ಈ ಸಿಹಿಯಾದ ಕನಸು, ನಿನ್ನೆ ರಾತ್ರಿಯೇ ನಿಜವಾಗಲೂ ನನಸಾಗಿತ್ತು:)

©Jepee Bhat!

ಮೆಲ್ಲ ಮೆಲ್ಲನೆ ಕೈ ಹಿಡಿದು ನಡೆಯುತಿರಲು,
ಅವಳ ಮುಖ ರಾತ್ರಿಯಲ್ಲೂ ಹೊಳೆಯುತ್ತಿತ್ತು.
ಇಬ್ಬರ ಮನಸಲ್ಲೂ ಖುಷಿಯ ಅಲೆ ಎದ್ದಿರಲು,
ಅವಳ ಕೈ ಹಿಡಿದ ನನ್ನ ಕೈ ಸಣ್ಣಗೆ ಹೆದರುತಿತ್ತು.

ಚಳಿಯ ರಾತ್ರಿಯಲೂ ಆ ಚಂದಿರನ ಕೆಳಗೆ,
ಮೈ ಮನವೆಲ್ಲಾ ಅರಳಿ ಕಟ್ಟು ಪಾಡು ಕಡೆಗೆ ಸರಿದಿತ್ತು.
ಹಗಲಿನಲ್ಲಿ ಹಚ್ಹ ಹಸುರಾಗಿ ಕಂಡ ಗಿಡ ಮರಗಳು,
ಕಪ್ಪು ಕಪ್ಪಾಗಿ ತಾವು ಇಲ್ಲವೆಂಬ ಸೂಚನೆ ನೀಡಿತ್ತು.

ಇಷ್ಟಾಗಿ ಮತ್ತೆ ಹಿಂದಿರುಗಿ ಬರಲು,
ಕತ್ತಲು ಸರಿದು ಬೆಳಕು ಹರಿದಿತ್ತು.
ಎಂದೋ ಕಂಡ ಈ ಸಿಹಿಯಾದ ಕನಸು
ನಿನ್ನೆ ರಾತ್ರಿಯೇ ನಿಜವಾಗಲೂ ನನಸಾಗಿತ್ತು:)

Monday, August 01, 2011

ನನ್ನ ಅನಾಮಿಕ!

Jepee Bhat's!
 
ಪ್ರೀತಿಯ ಅನಾಮಿಕ...,
ಯಾರೂ ನನ್ನ ಸನಿಹವಿಲ್ಲದಿದ್ದಾಗ,
ಯಾರೂ ನನ್ನ ನೋಡದಿದ್ದಾಗ,
ಯಾರೂ ನನ್ನ ಜೊತೆ ನಗದಿದ್ದಾಗ,
ಯಾರೂ ನನ್ನ ಜೊತೆ ಮಾತನಾಡದಿದ್ದಾಗ,
ಯಾರೂ ನನ್ನ ಲೆಕ್ಕಿಸದೇ ಇದ್ದಾಗ,
ಯಾರೂ ನನ್ನ ಕಣ್ಣೀರನ್ನು ನೋಡಿಯೂ ಸಹ ನೋಡದಂತಿದ್ದಾಗ,
ಯಾರೂ ನನ್ನ ಭಾವನೆಗಳನ್ನೇ ಅರ್ಥ ಮಾಡಿಕೊಳ್ಳದಿದ್ದಾಗ,
ಯಾರೂ ನನ್ನ ಅಳುವಿಗೂ ಬೆಲೆ ಕೊಡದಿದ್ದಾಗ,
ಹೃದಯದ ದುಃಖದ ಕಟ್ಟೆ ಒಡೆದು ಅಳುವೇ ಬಂದಂತಾಗಿ ಕೊನೆಗೆ ಅಳುವೂ ಬರದಿದ್ದಾಗ,
ನನ್ನ ಬದುಕಿನ ಪ್ರತೀ ಕ್ಷಣದಲ್ಲೂ, ಪ್ರತೀ ನಿಮಿಷದಲ್ಲೂ, ನನ್ನ ಪ್ರತೀ ದಿನದ ಪ್ರತಿ ಹೃದಯದ ಬಡಿತದಲ್ಲಿ ಕಾಡುವ ನಿನಗೆ..,
ಈ ಕಾಡುವಿಕೆ ದಯವಿಟ್ಟು ಹೀಗೆಯೇ ನನಗೆ ನಿರಂತರವಾಗಿರಲಿ.
ಪ್ರೀತಿಯಿಂದ ನಿನ್ನವನೇ,
-ಜೇಪೀ ಭಟ್!