Wednesday, May 08, 2013

ನೀರಲ್ಲಿ ತೊಯ್ದ ನಮ್ಮ ಮನೆಯದೇ ಆದ ಮಲ್ಲಿಗೆಯ ಹೂವ ದಂಡೆ...!

Jepee Bhat..

ಮಳೆಯ ಕೊರೆತಕ್ಕೆ ಸಿಕ್ಕ ಮಣ್ಣು ಸೂಸಿದೆ ಪರಿಮಳ
ಇದರ ಪರಿವೇ ಇಲ್ಲದ ಮನಸುಗಳ ಮುದ್ದು ತಳಮಳ,
ಎಂದೋ ಕಣ್ಣಿಗೆ ಕಂಡ ಕಿಟಕಿಯ ಹೊರಗಿನ ಅವಳ ಸುಂದರ ಕೂದಲು
ಮತ್ತೆ ಮತ್ತೆ ಒತ್ತಿ ಹೇಳಿವೆ ಹೃದಯಕ್ಕೆ ಅಲ್ಲೇ ನೋಡಲು..

ಮಿಂಚು ಬರಸೆಳೆದು ಮೋಡಕ್ಕೆ ಅಪ್ಪಿ ಕೊಟ್ಟ ಮುತ್ತು
ಮತ್ತದೇ ದೊಡ್ಡ ಸಣ್ಣ ಹನಿಯಾಗಿ ಖುಷಿಯಾಗಿ ನೆಲಕ್ಕೆ ಬಿತ್ತು,
ಅದನ್ನರಿತ ಬಾಳೆ, ಕೆಸು, ಹಲಸಿನೆಲೆಗಳು ಮೆಲ್ಲನೆ ಗೊಣಲ್ಲಾಡಿಸಲು
ಅಂಬಾ ಎನುತ ಕೊಟ್ಟಿಗೆಯಲ್ಲಿನ ಗೌರಿ ತುಂಬಿಸಿತು ಚೊಂಬು ನೊರೆ ಹಾಲು..

ದಿನಾ ನೋಡಿದ ಅವಳನ್ನೇ ಕಲ್ಪಿಸಿ ಕೊಯ್ದ
ನಮ್ಮದೇ ಮನೆಯ ಮಲ್ಲಿಗೆ ಹೂವ ಮತ್ತೆ ಕಂಡೆ,
ಮರುದಿನ ಅವಳದೇ ಮನೆಯಲ್ಲಿ ಕೆಂಪನೆಯ ಸೀರೆಯಲ್ಲಿ ಅವಳ ಮುಡಿಯಲ್ಲಿ
ನೀರಲ್ಲಿ ತೊಯ್ದ ನಮ್ಮ ಮನೆಯದೇ ಆದ ಮಲ್ಲಿಗೆಯ ಹೂವ ದಂಡೆ...!!:):)

2 comments:

ಸಂಧ್ಯಾ ಶ್ರೀಧರ್ ಭಟ್ said...

Good Lines JP... Tumbaa dinada nantara nin blog update khushi kodtu...

ಜೇಪೀ ಭಟ್ ! said...

ಸಂಧ್ಯಾ : ::
ಥ್ಯಾಂಕ್ಸ್ :) ಬರ್ಯಲೇ ಟೈಪ್ ಮಾಡಲೆ ಟೈಮ್ ಇಲ್ಲೇ :( :(