Sunday, June 19, 2011

ಮತ್ತೆ ಏನನ್ನಾದರೂ ಸಾಧಿಸಲೇ ಬೇಕು ಎಂದಾದರೆ ಉಳಿದ ಸ್ಪೂರ್ತಿಯ ಚಿಲುಮೆಯೇ ಸಾಕಲ್ಲಾ...

Jepee Bhat

ನಾ ಒಂಟಿಯಾಗಿ ಕಾಡಲ್ಲಿ ಪಯಣಿಸುತ್ತಿದ್ದೆ,
ಅದ್ಯಾವಾಗಲೋ ನೀ ಮನದಲ್ಲಿ ಬಂದು ಕೂತಿದ್ದೆ.,
ಹಳೆಯ ನೆನಪುಗಳೆಲ್ಲವೂ ಓಲಾಡಿ ಜೀಕುತಲಿದ್ದವು,
ಮನದ ಮೂಲೆಯಲ್ಲೆಲ್ಲೋ ಖುಷಿಯ ಮೂಟೆ ನಗುತಿದ್ದವು..

ಮೇಲಿಂದ ಬೀಳುತಿದ್ದ ಮಳೆಯ ಹನಿಗಳು ನೆತ್ತಿಯನ್ನು ತಂಪಾಗಿಸಿದ್ದವು,

ಹೃದಯದ ಒಳಗೆ ಬೆಂಕಿಯ ಅಲೆಗಳು ಉರಿಯಲು ಶುರುವಾಗಿದ್ದವು,
ಹಳೆಯ ನೆನಪುಗಳು ಮತ್ತೊಮ್ಮೆ ಕೆಣಕಿ ನನ್ನನ್ನೂ ಅದರಲ್ಲಿ ತಳ್ಳಿದ್ದವು,
ಅದಾಗಲೇ ಮಳೆನೀರಿನ ಜೊತೆ ಜೊತೆಗೇ ಕಣ್ಣ ಹನಿಗಳೂ ಲೀನವಾಗಿದ್ದವು...

ಯೋಚನೆಯ ಹಾದಿಯಲ್ಲಿ ದಾರಿ ಮುಗಿದಿದ್ದೇ ಗೊತ್ತಾಗಲಿಲ್ಲ,

ಜೀವನವು ಏನೂ ಮಾಡದೇ ವ್ಯರ್ಥವಾಗಿ ಕಳೆದು ಹೋಯಿತಲ್ಲಾ,
  ಇನ್ನುಳಿದ ಬಾಳಿಗೆ ಹಳೆಯ ಗತಿಸಿ ಹೋದ ಸಿಹಿ ಕಹಿ ನೆನಪುಗಳೇ ಇವೆಯಲ್ಲಾ,
ಇನ್ನೇನಾದರೂ ಸಾಧಿಸಲೇಬೇಕೆಂದರೆ ಉಳಿದ ಸ್ಪೂರ್ತಿಯ ಚಿಲುಮೆಯೇ ಸಾಕಲ್ಲಾ...